ಹಂಬಲ ಮತ್ತು ಸ್ವಾಭಿಮಾನ

ಅವನು-,
ಸ್ವಚ್ಛಂದವಾಗಿ ನಗುವ
ಜೋಡಿಗಳನು ನೋಡಿ ಕರಬುತ್ತಿದ್ದೇನೆ
ಕಿಲುಬುಗಟ್ಟಿದ ಗೊಡ್ಡುಯೋಚನೆಗಳಿಗೆ
ಸೋನೆ ಮಳೆ ಸುರಿಸು.

ಅವಳು-,
ಚಂದಿರ ನಗುನಗುತ ಬೆಂಕಿಹಚ್ಚಿದರೆ
ಸೂರ್ಯ ಉರಿದುರಿದು ಕರಕಲಾಗಿಸಿದ
ಪ್ರೀತಿಯ ಮಾತುಗಳಿಂದ ಒಮ್ಮೆಯಾದರೂ
ಕಣ್ಣೀರು ಸುರಿಸುವಂತೆ ಮಾಡು.

ಇಬ್ಬರಿಗೂ,
ಧಾರಾಕಾರವಾಗಿ ಸುರಿವಮಳೆ ಹೊರಗೆ
ಮನೆ ತುಂಬ ಆವರಿಸಿದ ಕಗ್ಗತ್ತಲು
ಪ್ರೀತಿ ಹೊತ್ತಿಕೊಳ್ಳಲು ಹೇಳಿದಂತಿತ್ತು
ಏನಾದರೂ ಮಾತನಾಡಲು ಒಳಗೊಳಗೇ ಹಂಬಲ
ಆದರೂ ಮತ್ತೆ ಮತ್ತೆ ಮನಕೆ ಮಳೆಯ ರಭಸ
ಮೌನ ಮುರಿಯಲಿಲ್ಲ
ಧ್ವನಿ ಚಿಗುರಲೇ ಇಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾವೈದು ಜನ
Next post ಹಬ್ಬಗಳು

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

cheap jordans|wholesale air max|wholesale jordans|wholesale jewelry|wholesale jerseys